Skip to main content

ಪರಂಪರೆ 🏏 💯 ❤

   



       ನಾವು ಚಿಕ್ಕವರಿದ್ದಾಗ ಪ್ರತೀ ದಿನವೂ ಶಾಲೆಗೆ ಹೋಗುತ್ತಿದ್ದೆವು.  ಬಂಕ್ ಅನ್ನೋ ಪದವು ನಮ್ಮ ಕಿವಿಗೆ ಬೀಳುತ್ತಿರಲ್ಲಿಲ್ಲ. ಹಾಗೆ ಹೇಳೋ ಬದಲು ಆತರ ಬಂಕ್ ಹಾಕೋ ಶೋಕಿ ಇರ್ಲಿಲ್ಲ ಅಂತ ಹೇಳಬಹುದು.

   ಎಲ್ಲರ ಮನೆ ಅಲ್ಲದಿದ್ದರೂ, ತುಂಬಾ ಮನೆಗಳಲ್ಲಿ ದಿನಾ ಸಂಜೆ ಮಕ್ಕಳು ಆಟವಾಡುತ್ತಿದ್ದರು. ಅದರಲ್ಲಿಯೂ ಮುಖ್ಯವಾಗಿ ಕ್ರಿಕೆಟ್ ಅನ್ನೋದು ಬಹು ಮುಖ್ಯ ಆಟ. ಕ್ರಿಕೆಟ್ ಆಡಬೇಕಾದ್ರೆ ಯುದ್ಧಕ್ಕೆ ನಿಂತ ಅನುಭವ. ಅದರಲ್ಲಿ ಜಗಳ ಶುರುವಾದರೆ ಬ್ಯಾಟ್ ಮತ್ತೆ ವಿಕೆಟ್ ಗಳೇ ಆಯುಧಗಳು. ಬ್ರಿಟೀಷರು ಭಾರತ ಬಿಟ್ಟರು ಕ್ರಿಕೆಟ್ ನಮ್ಮನ್ನ ಬಿಟ್ಟಿಲ್ಲ ಅಂತ ಹೇಳಬಹುದು.
ನಾವು ಆಡುವ ಕ್ರಿಕೆಟ್ ಅಲ್ಲಿ ನಮ್ಮದೇ ಆದ ಒಂದಿಷ್ಟು ನಿಯಮಗಳು ಇರುತ್ತಿತ್ತು. ಅಕ್ಕ ಪಕ್ಕದ ಮನೆಯ ಹುಡುಗರೆಲ್ಲ ಸೇರಿ ಕ್ರಿಕೆಟ್ ಆಡುವ ಮಜಾನೆ ಬೇರೆ.

   
     ರವಿವಾರ ಅಥವಾ ರಜಾದಿನಗಳಲ್ಲಿ ಬೆಳಿಗ್ಗೆ ತಿಂಡಿ ತಿಂದು ಕ್ರಿಕೆಟ್ ಆಡೋಕೆ ಹೋದರೆ ಮುಗೀತು, ಇನ್ನು ಸಂಜೆ  ಮನೆಗೆ ಬರೋದು ಅಂತ ಎಲ್ಲಾ ತಂದೆ ತಾಯಂದಿರಿಗೂ ಗೊತ್ತಿರೋ ವಿಚಾರ. ಅದರ ಮಧ್ಯವೂ ಸ್ವಲ್ಪ ಮಂದಿ ಪೋಷಕರು ಊಟದ ಸಮಯದಲ್ಲಿ ತಮ್ಮ ಮಕ್ಕಳನ್ನು ಒತ್ತಾಯದಿಂದ ಕರೆತಂದು, ಊಟ ಮುಗಿಯೋದೇ ತಡ, ಅದೇ ವೇಗದಲ್ಲಿ ಮಕ್ಕಳು ಮತ್ತೆ ಕ್ರಿಕೆಟ್ ಆಡೋಕೆ ಹೋಗುತ್ತಿದ್ದರು.

     ಕೆಲವು ಕ್ಷಣಗಳನ್ನು ನೆನಪಿಸಿಕೊಂಡು ಈಗಲೂ ನಗುತ್ತೇವೆ. ಬಾಲ್ಯವೇ ಹಾಗೆ. ಅದರಲ್ಲೂ ಸಂಜೆ ಕ್ರಿಕೆಟ್ ಆಡುವ "ಪರಂಪರೆ" ಇಂದ ಬಂದವರಿಗೆ ಇದರ ಮಜಾ ಗೊತ್ತಿದ್ದೆ ಇರುತ್ತೆ.
ಇಂತಹ ಪರಂಪರೆ ಇಂದ ಬಂದವರಿಗೆ ಅವರ ಬಾಲ್ಯವನ್ನು ಮೆಲಕು ಹಾಕುವ ಒಂದು ಸಣ್ಣ ಪ್ರಯತ್ನ ಇದಾಗಿದೆ.

Comments

Popular posts from this blog

ಗಾವೋ ವಿಶ್ವಸ್ಯ ಮಾತರಃ

        ಗಾವೋ ವಿಶ್ವಸ್ಯ ಮಾತರಃ ಎಂದರೆ ಈ ಜಗತ್ತಿಗೆ ಗೋವು ತಾಯಿ ಇದ್ದಂತೆ. ಸರಳ, ಮೂಕ ಮತ್ತು ಉಪಯುಕ್ತ ವಾದ ಜೀವಿ. ನಾವು ಎಷ್ಟು ಪ್ರೀತಿ ತೋರಿಸ್ತಿವೋ ಅದಕ್ಕೆ ಮೀರಿದ ಪ್ರೀತಿ ನಮಗೆ  ಕೊಡುತ್ತದೆ. ಅದರ ಹಾಲು ಎಷ್ಟು ಪ್ರಯೋಜನಕಾರಿ ಎಂದರೆ ಅದಿಲ್ಲದೆ ನಮ್ಮ ದಿನನಿತ್ಯ ಆಹಾರ ಪದ್ಧತಿ ಸಂಪೂರ್ಣವಾಗುವುದಿಲ್ಲ.   ನಾವು ತಿನ್ನುವ ಎಷ್ಟೋ ಸಿಹಿ ಪದಾರ್ಥಗಳು ಹಾಲಿಲ್ಲದೆ ತಯಾರಾಗುವುದಿಲ್ಲ. ಆದರೆ ಈ ಹಾಲನ್ನು ಉತ್ಪಾದನೆ ಮಾಡುವ ಡೈರಿ ಫಾರ್ಮ ಗಳ ಸಂಕಷ್ಟ ಯಾರಿಗೂ ತಿಳಿದಿಲ್ಲ . ಅವರಿಗೆ ಆಗುವ ನಷ್ಟ ಅಷ್ಟಿಷ್ಟಲ್ಲ. ಇದರಲ್ಲಿ ಕಲಬರಿಕೆ ಮಾಡದೆ ಇದ್ದರೆ ಅವರಿಗೂ ಉಳಿಗಾಲವಿಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ.       ಮೊನ್ನೆ ತಾನೆ ಸಾಗರದ ಸಮೀಪದಲ್ಲಿರುವ ಒಂದು ಡೈರಿ ಫಾರ್ಮ್ ಗೆ ಭೇಟಿ ನೀಡಿದೆ. ಅಲ್ಲಿ ಅವರು ಎದುರಿಸುವ ಸವಾಲುಗಳನ್ನು ಬಿಚ್ಚಿಟ್ಟರು. ಅಲ್ಲಿ ಅಂದಾಜು 300 ದನಗಳು ಇದ್ದವು. ಸುಮಾರಷ್ಟು ಹೈಬ್ರಿಡ್ ತಳಿಗಳು. ಉಳಿದವು ಮಲ್ನಾಡ್ ಗಿಡ್ಡ. ಅವರಿಗೆ ಅಂದಾಜು 600 ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ದಿನಕ್ಕೆ ಒಂದು ದನದ ಮೇಲೆ ಅವರಿಗೆ 200 ರೂಪಾಯಿಗಳನ್ನು ವ್ಯಯಿಸಬೇಕಾಗುತ್ತದೆ. 300 ದನಕ್ಕೆ  ಅಂದಾಜು 60,000 ರೂಪಾಯಿಗಳು. ಪ್ರತಿ ಲೀಟರ್ ಗು ಅಬ್ಬಬ್ಬಾ ಅಂದರೆ 40 ರೂಪಾಯಿಗಳು ಎಂದು ಭಾವಿಸೋಣ. ಹಂಗಾದ್ರೆ ಅವರಿಗೆ ಬರೋದು  24000 ರ...

ಮನೆ-ಮನಗಳಿಂದ ಮರೆಯಾದ ಗುಬ್ಬಚ್ಚಿ

          ಅ ದೊಂದು ಕಾಲವಿತ್ತು, ಮುಂಜಾನೆ ಎದ್ದು ಹೊರಗೆ ಹೋದರೆ ಗುಬ್ಬಚ್ಚಿಯ ಚಿಲಿಪಿಲಿ ಕಲರವವನ್ನು ಕೇಳುತ್ತಿದ್ದೆವು. ಸಂಜೆಯಾದರೆ, ಗುಬ್ಬಚ್ಚಿ ಮರಳಿ ಗೂಡಿಗೆ ಸೇರುವುದನ್ನು ಕೂಡ ನೋಡಬಹುದಿತ್ತು. ಅವು ತಮ್ಮ ಲೋಕದಲ್ಲೇ ಹಾರಾಡುತ್ತ ಕುಣಿಯುತ್ತ ಸಂತೋಷದಿಂದ ಇದ್ದವು. ಅವುಗಳ ಸಂತೋಷವೇ ನಮ್ಮ ಸಂತೋಷವಾಗಿತ್ತು. ಪರಿಸರವನ್ನು ನೋಡಿ ಯಾರಿಗೆ ಖುಷಿಯಾಗುವುದಿಲ್ಲ ಹೇಳಿ! ಅದರ ಜೊತೆಗೆ ಹಕ್ಕಿಗಳ ಕಲರವವೂ ಸೇರಿದರೆ ಮತ್ತಷ್ಟು ಖುಷಿ.         ಅದಕ್ಕೆ ವಿಶಾಲವಾದ ಜಾಗ ಬೇಡ, ಒಂದು ಸಣ್ಣ ಮರವಿದ್ದರೆ ಸಾಕು, ಗುಬ್ಬಚಿಯೂ ಖುಷಿ ಖುಷಿಯಾಗಿ ಇರುತ್ತವೆ. ಹಾಗೆ ನೋಡಿದರೆ ಈ ಬುದ್ಧಿ ಜೀವಿಗಳ ಆಸೆಯಿಂದಾಗಿ ಇವರ ಪುಟ್ಟ ಪರಿವಾರಕ್ಕೆ ಧಕ್ಕೆ ಉಂಟಾಯಿತು ಎಂದರೆ ತಪ್ಪಲ್ಲ. ಮನುಷ್ಯರು ಚಿನ್ನ, ಆಸ್ತಿ ವಿಚಾರಕ್ಕೆ ಅದೆಷ್ಟು ಕಿತ್ತಾಡುತ್ತಾರೆ. ಆಸ್ತಿಯ ವಿಚಾರದಲ್ಲಂತೂ ಅವರಿಗೆ ಸಂಬಂಧಗಳ ಮಹತ್ವವೇ ತಿಳಿಯುವುದಿಲ್ಲ. ಸ್ವಂತ ಪೋಷಕರನ್ನೇ ಮನೆಯಿಂದ ಹೊರ ಹಾಕುವ ಮಕ್ಕಳಿರುವಾಗ, ಈ ಬುದ್ಧಿ ಜೀವಿಗಳಿಗೆ ನಿಜಕ್ಕೂ ಬುದ್ಧಿ ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ.          ಅದೆಲ್ಲ ಇರಲಿ, ಇಂತಹ ಯಾವುದೇ ಜಂಜಾಟವಿಲ್ಲದ ಬದುಕನ್ನು ನಡೆಸುತ್ತಿರುವ ಗುಬ್ಬಚಿಯ ವಿಚಾರದ್ಲಲ್ಲಿ ಮನುಷ್ಯನು ಘೋರ ತಪ್ಪನ್ನು ಮಾಡುತ್ತಿದ್ದಾನೆ. ಇದಕ್ಕೆ ಈ ಬ್ಲಾಗಿನ ಜೊತೆ ಹಾಕಿರ...

ನೆನಪಿನಂಗಳ

             ಓ ದುಗರೇ, ನಾನು ಚಿಕ್ಕಮಗಳೂರಿನ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಬಗ್ಗೆ ಮಾತಾಡಬೇಕೆಂಬುದು ಬಹು ಸಮಯದ ಇಚ್ಛೆ. ಸುತ್ತ ಮುತ್ತಲೂ ಎಲ್ಲೆಲ್ಲೂ ಹಸಿರು , ಗುಡ್ಡ ಬೆಟ್ಟಗಳ ಮಧ್ಯೆ ಇರುವ ಚಿಕ್ಕಮಗಳೂರು ಮಲೆನಾಡಿನ ಹೃದಯ ಎಂದೇ ಹೇಳಬಹುದು. ಇಂತಹ ವಾತಾವರಣದ ಮಧ್ಯೆ ಇರುವ ನಮ್ಮ ವಿದ್ಯಾರ್ಥಿ ನಿಲಯ ನಿಜಕ್ಕೂ ಅಧ್ಭುತ ಎಂದೇ ಹೇಳಬಹುದು.        ಈ ವಿದ್ಯಾರ್ಥಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಂದಾಗಿ ಈ ನಿಲಯ ಅಧ್ಭುತ ಎನ್ನಬಹುದು. ಚಿಕ್ಕಮಗಳೂರಿನಲ್ಲಿ ನನಗೆ ಇಂಜಿನಿಯರಿಂಗ್ ಸೀಟ್ ಸಿಕ್ಕಿತ್ತು. ಮೊದಲ ಬಾರಿಗೆ ನಾನು ಚಿಕ್ಕಮಗಳೂರಿಗೆ ಬಂದಾಗ ವಸತಿಯ ಬಗೆಗೆ ತಲೆಕೆಡಿಸಿಕೊಂಡಿದ್ದೆ. ನಮ್ಮ ಕಾಲೇಜಿನಲ್ಲಿ  ವಿದ್ಯಾರ್ಥಿ ನಿಲಯದಲ್ಲಿ ರೂಮ್ ಕೇಳಿದಾಗ, "ನೀವು ಬ್ರಾಹ್ಮಣರಲ್ವಾ, ನೀವು ಕಾಲೇಜಿನಿಂದ ಹೀಗೆ ಎದುರಿನ ರಸ್ತೆಯಲ್ಲಿ ಹೋದರೆ ನಿಮಗಾಗಿ, ನಿಮ್ಮ ಸಮುದಾಯದವರಿಗಾಗಿ ಕಟ್ಟಿಸಿದ ವಿದ್ಯಾರ್ಥಿ ನಿಲಯ ಇದೆ" ಅಂತ ಹೇಳಿ, ಅಲ್ಲಿಗೆ ಕಳುಹಿಸಿದರು.         ವಿದ್ಯಾರ್ಥಿ ನಿಲಯದ ವಾತಾವರಣ ತುಂಬಾ ಚೆನ್ನಾಗಿತ್ತು. ಸುತ್ತಲೂ ಕಟ್ಟಡ, ಮಧ್ಯದಲ್ಲಿ ಬಗೆ ಬಗೆಯ ಹೂವುಳ್ಳ ಗಿಡಗಳು ಮತ್ತು ಶೃಂಗೇರಿ ಸ್ವಾಮಿಗಳು ಸ್ಥಾಪಿಸಿದ ವಿದ್ಯಾ ಗಣಪತಿ ಯ ಗುಡಿ. ಹುಡುಗರೆಲ್ಲರೂ ತುಂಬಾ...